Thursday, November 30, 2006

ಏಡ್ಸ್ ಹೇಗೆ ಪ್ರಾರಂಭವಾಯಿತು?

ಇಂದು (ಡಿ.1) ವಿಶ್ವ ಏಡ್ಸ್ ದಿನ. ಹಾಗೆಂದರೇನು? ಇಂದು ಎಲ್ಲರೂ ಏಡ್ಸ್ ಹೊಂದಬೇಕು ಎಂದೇ? ಗೊತ್ತಿಲ್ಲ. ಎಲ್ಲ ಪತ್ರಿಕೆಯವರಂತೆ ಏಡ್ಸ್ ಬಗ್ಗೆ ನಮ್ಮ ಬೊಗಳೆ ರಗಳೆ ಬ್ಯೂರೋದವರು ಕೂಡ ಒಂದು ಫೀಚರ್ ಮಾಡಿದ್ದಾರೆ. ಆದರೆ ಅವರು ಒಂದು ಬುಹು ಮುಖ್ಯವಾದ ವಿಷಯವನ್ನೇ ಬಿಟ್ಟುಬಿಟ್ಟಿದ್ದಾರೆ. ಅದು ಏಡ್ಸ್ ಹೇಗೆ ಪ್ರಾರಂಭವಾಯಿತು ಎಂಬುದರ ಬಗ್ಗೆ. ಅಮೇರಿಕದ ವಿಜ್ಞಾನಿಗಳು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿರುವುದೇನೆಂದರೆ ಏಡ್ಸ್ ಆಫ್ರಿಕಾದಲ್ಲಿ ಪ್ರಾರಂಭವಾಗಿ ವಿಶ್ವಕ್ಕೆಲ್ಲ ಹಬ್ಬಿತು ಎಂದು. ಈ ಹೇಳಿಕೆಯನ್ನು ಆಫ್ರಿಕಾದ ಜನರು ಖಂಡತುಂಡವಾಗಿ ಖಂಡಿಸಿದ್ದಾರೆ. ಅವರ ಪ್ರಕಾರ "ಅಮೇರಿಕದವರು ತೃತೀಯ ಜಗತ್ತಿನ ದೇಶಗಳಿಗೆ ಮಾಡುತ್ತಿರುವುದನ್ನೇ ಜನರು ಒಬ್ಬರಿಗೊಬ್ಬರು ಮಾಡತೊಡಗಿದಾಗ ಏಡ್ಸ್ ಪ್ರಾರಂಭವಾಯಿತು".

Sunday, November 26, 2006

ಸರಕಾರ ಸೈಕಲ್ ಕೊಡಿಸಿದ್ದೇಕೆ?

ಕರ್ನಾಟಕ ಸರಕಾರವು ಮೊದಲು ಬಾಲಿಕೆಯರುಗಳಿಗೆ ಸೈಕಲ್ ನೀಡಿತ್ತು. ನತರ ಬಾಲಕರುಗಳಿಗೂ ಸೈಕಲ್ ನೀಡಿತ್ತು. ಇದರ ಬಗ್ಗೆ ಬೊಗಳೆ ರಗಳೆಯ ಏಕಸದಸ್ಯ ಬ್ಯೂರೋವು ತನಿಖೆ ಮಾಡಿ ವರದಿ ಸಲ್ಲಿಸಿತ್ತು. ಆದರೆ ನಾವು ಇನ್ನೂ ವಿಶೇಷ ತನಿಖೆ ನಡೆಸಿದಾಗ ಎರಡು ಭಯಂಕರ ಸತ್ಯಸಂಗತಿಗಳು ಹೊರಬಿದ್ದವು. ಮೊದಲನೆಯದು ಬೊಗಳೆ ರಗಳೆ ಬ್ಯೂರೋದ ತನಿಖಾ ಸದಸ್ಯರು ತನಿಖೆಯನ್ನೇ ನಡೆಸಲಿಲ್ಲ; ಬದಲಿಗೆ ಅವರು ಬೆಂಗಳೂರಿನ ಮಬ್ಬುಗತ್ತಲಿನ ಪಬ್ಬೊಂದರಲ್ಲಿ ಕುಳಿತು ಬಿಯರ್ ಹೀರುತ್ತ ಬರೆದ ತನಿಖಾ ವರದಿ ಆಗಿತ್ತದು ಎಂಬುದು. ಎರಡನೆಯ ಇನ್ನಷ್ಟು ಭಯಂಕರ ಸತ್ಯವೇನೆಂದರೆ ಕರ್ನಾಟಕ ಸರಕಾರವು ಸೈಕಲ್ ಕೊಡಿಸಿದ್ದು ಮಿತಿಮೀರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಎಂಬುದು. ನಮ್ಮ ಸರಕಾರಗಳು ಎಷ್ಟೇ ಯೋಜನೆ ಕಾರ್ಯಕ್ರಮಗಳನ್ನು ಹಾಕಿಕೊಂಡರೂ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಏರುತ್ತಲೇ ಇದೆ. ಇದನ್ನು ನಿಯಂತ್ರಣಕ್ಕೆ ತರಲು ಇರುವ ಏಕೈಕ ಉಪಾಯವೆಂದರೆ ಜನರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವುದು. ಸೈಕಲ್ ತುಳಿಯುವುದರಿಂದ ಜನರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ. ಬೊಗಳೆ ರಗಳೆ ಬ್ಯೂರೋದ ಸದಸ್ಯರ ಗಮನಕ್ಕೆ ಈ ವಿಷಯ ಬರಬಾರದೆಂದೇ ಅವರಿಗೆ ಪಬ್ಬಿನಲ್ಲಿ ಹೆಂಡ ಕುಡಿಸಲಾಗಿತ್ತು ಎಂಬ ಮೂರನೆಯ ಅತಿ ಭಯಂಕರ ಸತ್ಯವನ್ನೂ ನಮ್ಮ ಸೊನ್ನೆ ಸದಸ್ಯ ಬ್ಯೂರೋ ಪತ್ತೆಹಚ್ಚಿದೆ.

Monday, November 20, 2006

ಹೊಸ ಬೈಕ್

ಸಂತಾ ಮತ್ತು ಬಂತಾ ಒಂದೇ ಆಫೀಸಿನಲ್ಲಿ ಕೆಲಸ ಮಾಡುವವರು. ದಿನಾ ಜೊತೆಯಲ್ಲಿ ಬಸ್ಸಿನಲ್ಲಿ ಹೋಗುವವರು. ಒಂದು ದಿನ ಸಂತಾ ಬಸ್ಸಿಗೆ ಕಾಯುತ್ತಿದ್ದಾಗ ಬಂತಾ ಹೊಸ ಬೈಕಿನಲ್ಲಿ ಬಂದ. ಸಂತಾಗೆ ಆಶ್ಚರ್ಯವಾಯಿತು. "ಇದು ಯಾವಾಗ ಹೊಸ ಬೈಕು ತೆಗೆದುಕೊಂಡೆ" ಎಂದು ಕೇಳಿದ. ಬಂತಾ ಹೇಳಿದ "ಲಾಟರಿ ಹೊಡೆಯಿತು".
"ಹೌದೇ? ಹೇಗೆ? "
"ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಹೊರಡುವಾಗ ತುಂಬ ರಾತ್ರಿ ಆಗಿತ್ತು. ಯಾವ ಬಸ್ಸೂ ಸಿಗಲಿಲ್ಲ. ಆಗ ಒಂದು ಬೈಕ್ ಬಂತು. ಲಿಫ್ಟ್ ಬೇಕಾ ಎಂದು ಕೇಳಿತು. ಬೈಕಿನಲ್ಲಿ ಹಿಂದೆ ಕುಳಿತು ಹೋಗುತ್ತಿದ್ದಾಗ ಗೊತ್ತಾಯಿತು, ಬೈಕಿನಲ್ಲಿದ್ದದ್ದು ಹೆಣ್ಣು ಎಂದು. ಆಕೆ ಒಂದು ನಿರ್ಜನ ಪ್ರದೇಶದಲ್ಲಿ ಬೈಕು ನಿಲ್ಲಿಸಿದಳು. ತನ್ನೆಲ್ಲಾ ಬಟ್ಟೆ ಕಳಚಿ ಇಟ್ಟಳು. ನಂತರ ಹೇಳಿದಳು -ಎಲ್ಲ ನಿನ್ನದೇ. ಏನು ಬೇಕೊ ತೆಗೆದುಕೊ. ನಾನು ಬೈಕು ತೆಗೆದುಕೊಂಡು ಬಂದೆ"
"ನೀನು ಮಾಡಿದ್ದು ಸರಿಯಾಗಿದೆ. ಹೆಣ್ಣಿನ ಬಟ್ಟೆ ತೆಗೆದುಕೊಂಡು ನಮಗೇನು ಪ್ರಯೋಜನ?"

Wednesday, November 08, 2006

ಕುಂಭ ಕುಚ ಬೇಕೇ?

ಕುವೆಂಪು ಅವರ ಕವನ "ಚಂದ್ರ ಮಂಚಕೆ ಬಾ ಚಕೋರಿ" ಯಲ್ಲಿ ಈ ಪದಗಳಿವೆ - "ಪೀನ ಕುಂಭ ಪಯೋಧವಿತ್ತ". ಎಲ್ಲ ಕನ್ಯೆಯರುಗಳಿಗೆ ಕುಂಭ ಕುಚದ ಆಸೆ ಇರಬಹುದು. ನಟೀಮಣಿಗಳಿಗೆ, ಮೋಡೆಲ್ ಹುಡುಗಿಯರಿಗಂತೂ ಖಂಡಿತ. "ಗಂಡಸ್ಥನ"ದ ಹೆಣ್ಣುಗಳೇನು ಮಾಡಬಹುದು? ಪ್ಲಾಸ್ಟಿಕ್ ಸರ್ಜರಿ? ನಮ್ಮ ನಟಿ ಶ್ರೀದೇವಿ ತನ್ನ ಮೂಗನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸಿಕೊಂಡುದು ಗೊತ್ತಿರಬಹುದು. ಆಧುನಿಕ ವಿಜ್ಞಾನ ಎಲ್ಲಕ್ಕೂ ಮದ್ದು ಕಂಡುಹಿಡಿದಿದೆ. ಪೀನಕುಂಭ ಪಯೋಧರೆಯಾಗಬೇಕೆ? ಹಾಗಿದ್ದರೆ ಸಿಲಿಕೋನ್ ವ್ಯಾಲಿ ತಮ್ಮದಾಗಿಸಿಕೊಳ್ಳಿ. ಏನು ಹಾಗೆಂದರೆ? ಸರ್ಜರಿ ಮಾಡಿಸಿಕೊಂಡು ಸಿಲಿಕಾನ್ ತುಂಬಿಸಿ ಗಾತ್ರ ದೊಡ್ಡದಾಗಿಸಿಕೊಳ್ಳುವುದು. ಇದನ್ನು ಈಗ ಅಮೆರಿಕ ಸರಕಾದವರು ಒಪ್ಪಿದ್ದಾರೆ. ಈ ಮೊದಲು ಇದಕ್ಕೆ ಇದ್ದ ನಿಷೇಧವನ್ನು ತೆಗೆದು ಹಾಕಲಾಗಿದೆ. ಹೆಚ್ಚಿನ ವಿವರಗಳಿಗೆ ಈ ವರದಿ ಓದಿ.

This page is powered by Blogger. Isn't yours?