Sunday, November 26, 2006

ಸರಕಾರ ಸೈಕಲ್ ಕೊಡಿಸಿದ್ದೇಕೆ?

ಕರ್ನಾಟಕ ಸರಕಾರವು ಮೊದಲು ಬಾಲಿಕೆಯರುಗಳಿಗೆ ಸೈಕಲ್ ನೀಡಿತ್ತು. ನತರ ಬಾಲಕರುಗಳಿಗೂ ಸೈಕಲ್ ನೀಡಿತ್ತು. ಇದರ ಬಗ್ಗೆ ಬೊಗಳೆ ರಗಳೆಯ ಏಕಸದಸ್ಯ ಬ್ಯೂರೋವು ತನಿಖೆ ಮಾಡಿ ವರದಿ ಸಲ್ಲಿಸಿತ್ತು. ಆದರೆ ನಾವು ಇನ್ನೂ ವಿಶೇಷ ತನಿಖೆ ನಡೆಸಿದಾಗ ಎರಡು ಭಯಂಕರ ಸತ್ಯಸಂಗತಿಗಳು ಹೊರಬಿದ್ದವು. ಮೊದಲನೆಯದು ಬೊಗಳೆ ರಗಳೆ ಬ್ಯೂರೋದ ತನಿಖಾ ಸದಸ್ಯರು ತನಿಖೆಯನ್ನೇ ನಡೆಸಲಿಲ್ಲ; ಬದಲಿಗೆ ಅವರು ಬೆಂಗಳೂರಿನ ಮಬ್ಬುಗತ್ತಲಿನ ಪಬ್ಬೊಂದರಲ್ಲಿ ಕುಳಿತು ಬಿಯರ್ ಹೀರುತ್ತ ಬರೆದ ತನಿಖಾ ವರದಿ ಆಗಿತ್ತದು ಎಂಬುದು. ಎರಡನೆಯ ಇನ್ನಷ್ಟು ಭಯಂಕರ ಸತ್ಯವೇನೆಂದರೆ ಕರ್ನಾಟಕ ಸರಕಾರವು ಸೈಕಲ್ ಕೊಡಿಸಿದ್ದು ಮಿತಿಮೀರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಎಂಬುದು. ನಮ್ಮ ಸರಕಾರಗಳು ಎಷ್ಟೇ ಯೋಜನೆ ಕಾರ್ಯಕ್ರಮಗಳನ್ನು ಹಾಕಿಕೊಂಡರೂ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಏರುತ್ತಲೇ ಇದೆ. ಇದನ್ನು ನಿಯಂತ್ರಣಕ್ಕೆ ತರಲು ಇರುವ ಏಕೈಕ ಉಪಾಯವೆಂದರೆ ಜನರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವುದು. ಸೈಕಲ್ ತುಳಿಯುವುದರಿಂದ ಜನರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ. ಬೊಗಳೆ ರಗಳೆ ಬ್ಯೂರೋದ ಸದಸ್ಯರ ಗಮನಕ್ಕೆ ಈ ವಿಷಯ ಬರಬಾರದೆಂದೇ ಅವರಿಗೆ ಪಬ್ಬಿನಲ್ಲಿ ಹೆಂಡ ಕುಡಿಸಲಾಗಿತ್ತು ಎಂಬ ಮೂರನೆಯ ಅತಿ ಭಯಂಕರ ಸತ್ಯವನ್ನೂ ನಮ್ಮ ಸೊನ್ನೆ ಸದಸ್ಯ ಬ್ಯೂರೋ ಪತ್ತೆಹಚ್ಚಿದೆ.

Comments:
ಎಂಡ್ಕುಡ್ಕರೇ........!!!!

ನಾವಲ್ಲಿಗೆ ಬೀರು ಹೀರಲು ಹೋಗಿಲ್ಲವೆಂದು ನಾವು ಹೀರಿದ ಬೀರಿನ ಮೇಲೆ ಪ್ರಮಾಣ ಮಾಡಿ ಹೇಳುತ್ತೇವೆ.

ನೀವಂತೂ ಪಬ್ಬಿನ ಮಬ್ಬಿನಲ್ಲೇ ಯಾವತ್ತೂ ಇರುವುದರಿಂದ ನಿಮ್ಮ ಕಣ್ಣು ಅದಕ್ಕೆ ಸೆಟ್ ಆಗಿಬಿಟ್ಟಿದೆ ಸ್ವಾಮೀ. ನಮಗೆ ಆ ಪಬ್ಬಿನಲ್ಲಿ ನೀವು ಗೋಚರಿಸಿರಲೇ ಇಲ್ಲ. ಇದು ಅನ್ಯಾಯ. ನಮಗೆ ತಿಳಿಯದಂತೆ ನೀವು ಮಾಡಿದ Sting ಕಾರ್ಯಾಚರಣೆಯನ್ನು ನಾವು ನಿಮ್ಮ ಪಬ್ಬಿಡೀ ಖಾಲಿ ಮಾಡುವ ಮೂಲಕ ಖಂಡತುಂಡವಾಗಿ ಪ್ರತಿಭಟಿಸುತ್ತೇವೆ.
ಪೀಪಾಯಿಗಳನ್ನು ಈಗಲೇ ರಕ್ಷಿಸಿಕೊಳ್ಳಿ.
 
Post a Comment



<< Home

This page is powered by Blogger. Isn't yours?