Friday, March 16, 2007

ಸಾರಾಯಿ ನಿಷೇಧಕ್ಕೆ ನಮ್ಮ ವಿರೋಧ

ಕರ್ನಾಟಕ ಸರಕಾರವು ಸಾರಾಯಿಯನ್ನು ನಿಷೇಧಿಸಲು ಹೊರಟಿರುವುದನ್ನು ಪಬ್ಬಿಗರ ಸಂಘ ತೀವ್ರವಾಗಿ ಪ್ರತಿಭಟಿಸುತ್ತಿದೆ. ಅದಕ್ಕೆ ಕಾರಣಗಳೆಂದರೆ-


Thursday, March 08, 2007

ಹೊಸ ಸೇವಾ ತೆರಿಗೆಗಳು

ತಭಾರ ಸರಕಾರದ ಹದೇಲಿಪುರದಲ್ಲಿ ನೆಲೆಸಿರುವ ಪಿತ್ತ ಸಚಿವ ಚಿಂದಿ ಅಂಬರಂ ಅವರು ಇತ್ತೀಚೆಗಷ್ಟೆ ತಮ್ಮ ಆಯವ್ಯಯಪತ್ರ ಮಂಡಿಸಿದರು. ಅದರಲ್ಲಿ ಹಲವು ಸೇವೆಗಳಿಗೆ ಸೇವಾತೆರಿಗೆ ವಿಧಿಸಿದ್ದಾರೆ. ನಿನ್ನೆ ನಡೆದ ಗೋಪ್ಯ ಸಭೆಯಲ್ಲಿ ಇನ್ನೂ ಕೆಲವು ಸೇವೆಗಳನ್ನು ಈ ಸೇವಾತೆರಿಗೆಯ ವ್ಯಾಪ್ತಿಗೆ ತರಲು ನಿರ್ಧರಿಸಲಾಯಿತು ಎಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿದೆ. ಅವುಗಳೆಂದರೆ -

ಸದ್ಯದಲ್ಲೇ ಹೊರಡಿಸಲಿರುವ ಬೆತ್ತಲೆ ಪತ್ರದಲ್ಲಿ (ಶ್ವೇತಪತ್ರದಂತೆ) ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ತಿಳಿದುಬಂದಿಲ್ಲ. ಈ ಎಲ್ಲ ಸೇವೆ ನೀಡುವ ಮಂದಿ ತಮ್ಮ ತಮ್ಮ ಸೇವೆಗಳನ್ನು ನೋಂದಾಯಿಸಕೊಳ್ಳುವಂತೆ ಸೂಚಿಸಲಾಗಿದೆ.


ಬೀರು ಕ್ಯಾನ್ ಎಸೆಯುವ ಫ್ರಿಜ್

ಫ್ರಿಜ್‌ನಲ್ಲಿ ಬಿಯರ್ ಬಾಟಲಿ, ಕ್ಯಾನ್ ಇಡುವುದು ಗೊತ್ತಿದೆ. ಬೀರು ಹೀರಬೇಕೆಂದಾಗೆಲ್ಲ ಎದ್ದು ಹೋಗುವುದು ಬೋರಿನ ಕೆಲಸ. ಅದೂ ಎಂಡ್ಕುಡ್ಕರಿಗೆ ಖಂಡಿತ ಬೋರು. ಇದಕ್ಕೂ ಒಬ್ಬ ಎಂಡ್ಕುಡ್ಕರು ಪರಿಹಾರ ಕಂಡು ಹುಡುಕಿದ್ದಾರೆ. ಅದೆಂದರೆ ಕುಳಿತಲ್ಲಿಗೆ ಬಿಯರ್ ಕ್ಯಾನನ್ನು ಫ್ರಿಜ್ ಎಸೆಯುವುದು. ಇದರ ಬಗ್ಗೆ ಹೆಚ್ಚಿನಬ ವಿವರ ಇಲ್ಲಿ ಓದಬಹುದು.

This page is powered by Blogger. Isn't yours?