Thursday, March 08, 2007

ಹೊಸ ಸೇವಾ ತೆರಿಗೆಗಳು

ತಭಾರ ಸರಕಾರದ ಹದೇಲಿಪುರದಲ್ಲಿ ನೆಲೆಸಿರುವ ಪಿತ್ತ ಸಚಿವ ಚಿಂದಿ ಅಂಬರಂ ಅವರು ಇತ್ತೀಚೆಗಷ್ಟೆ ತಮ್ಮ ಆಯವ್ಯಯಪತ್ರ ಮಂಡಿಸಿದರು. ಅದರಲ್ಲಿ ಹಲವು ಸೇವೆಗಳಿಗೆ ಸೇವಾತೆರಿಗೆ ವಿಧಿಸಿದ್ದಾರೆ. ನಿನ್ನೆ ನಡೆದ ಗೋಪ್ಯ ಸಭೆಯಲ್ಲಿ ಇನ್ನೂ ಕೆಲವು ಸೇವೆಗಳನ್ನು ಈ ಸೇವಾತೆರಿಗೆಯ ವ್ಯಾಪ್ತಿಗೆ ತರಲು ನಿರ್ಧರಿಸಲಾಯಿತು ಎಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿದೆ. ಅವುಗಳೆಂದರೆ -

ಸದ್ಯದಲ್ಲೇ ಹೊರಡಿಸಲಿರುವ ಬೆತ್ತಲೆ ಪತ್ರದಲ್ಲಿ (ಶ್ವೇತಪತ್ರದಂತೆ) ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ತಿಳಿದುಬಂದಿಲ್ಲ. ಈ ಎಲ್ಲ ಸೇವೆ ನೀಡುವ ಮಂದಿ ತಮ್ಮ ತಮ್ಮ ಸೇವೆಗಳನ್ನು ನೋಂದಾಯಿಸಕೊಳ್ಳುವಂತೆ ಸೂಚಿಸಲಾಗಿದೆ.


Comments: Post a Comment



<< Home

This page is powered by Blogger. Isn't yours?