Sunday, October 01, 2006

ವಯಾಗ್ರ - ವೈರಾಗ್ಯ

ಪ್ರ: ವಯಾಗ್ರ ತೆಗೆದುಕೊಂಡೂ ಗುಣ ಕಾಣದ ರೋಗಿಗೆ ಮುಂದಿನ ಗತಿ ಏನು?
ಉ: ವೈರಾಗ್ಯ

80 ವರ್ಷ ಪ್ರಾಯದ ಒಬ್ಬ ಅಜ್ಜ ಔಷಧದ ಅಂಗಡಿಗೆ ಬಂದು ವಯಾಗ್ರ ಕೇಳಿದ. ಅಂಗಡಿಯಾತ ಕಟ್ಟಿಕೊಡಲು ಹೊರಟಾಗ ಅಜ್ಜ ಹೇಳಿದ "ಅವುಗಳನ್ನು 4 ತುಂಡುಗಳಾಗಿ ಮಾಡಿಕೊಡು". ಅಂಗಡಿಯಾತ ಹೇಳಿದ "ಅದರಿಂದ ಏನೂ ಪ್ರಯೋಜನವಿಲ್ಲ". ಅಜ್ಜ ಉತ್ತರಿಸಿದ "ನಂಗೊತ್ತು. ವಯಾಗ್ರ ನನಗೆ ಬೇಕಾಗಿರುವುದು ನೀನು ಅಂದುಕೊಂಡಿರುವುದಕ್ಕಲ್ಲ. ನನಗೆ ಮೂತ್ರ ಹೊಯ್ಯುವಾಗ ನನ್ನ ಕಾಲಿನ ಮೇಲೆ ಬೀಳಬಾರದು. ಅಷ್ಟೆ."


ವಯಾಗ್ರ ವೈರಸ್ ಗೊತ್ತೆ? ಅದು ನಿಮ್ಮ ಫ್ಲಾಪಿಯನ್ನು ಹಾರ್ಡ್ ಡಿಸ್ಕ್ ಆಗಿ ಪರಿವರ್ತಿಸುತ್ತದೆ.


ಮೈಕ್ರೋ ಸಾಫ್ಟ್ ಅವರು ವಯಾಗ್ರ ಕೊಳ್ಳುತ್ತಿದ್ದಾರೆ ಎಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿಲ್ಲ.

ಈಗಷ್ಟೆ ಬಂದಿದೆ -ವಯಾಗ್ರ ಲೈಟ್. ಅದು ಮುಷ್ಟಿಮೈಥುನ ಮಾಡಿಕೊಳ್ಳುವವರಿಗೆ.

ವಯಾಗ್ರ ತಿಂದು ಕೆಲಸ ಮುಗಿಯುವ ಮೊದಲೆ ಸತ್ತ ವ್ಯಕ್ತಿ ಗೊತ್ತೆ? ಆತನ ಶವ ಪೆಟ್ಟಿಗೆಗೆ ಮುಚ್ಚಳ ಹಾಕಲು ಅಸಾಧ್ಯವಾಗಿ ಕೊನೆಗೆ ಏನು ಮಾಡಿದರು ಗೊತ್ತೆ? ಮುಚ್ಚಳದ ಮಧ್ಯದಲ್ಲೇ ಉಬ್ಬಿರುವಂತೆ ವಿನ್ಯಾಸ ಮಾಡಲಾಯಿತು.

ವಯಾಗ್ರಕ್ಕೂ ಭಾರತಕ್ಕೂ ಇರುವ ನಂಟು ಗೊತ್ತೆ? ವೈ ಆಗ್ರ ಎಂಬುದೇ ವಯಾಗ್ರ ಆಯಿತಂತೆ. ಶಾಹಜಾನನ ಕಾಲದಲ್ಲಿ ವಯಾಗ್ರ ಇದ್ದಿದ್ದರೆ ಮಮತಾಜ ಸಾಯುತ್ತಿರಲಿಲ್ಲ ಮತ್ತು ತಾಜಮಹಾಲ್ ಕಟ್ಟಿಸಬೇಕಾಗಿರಲಿಲ್ಲ ಎಂಬುದು ಬರಿಯ ಕುಹಕದ ಮಾತು.

ಮಹಾಭಾರತದ ಕಾಲದಲ್ಲಿ ವಯಾಗ್ರ ಇದ್ದಿದ್ದರೆ? ಪಾಂಡು ಕಾಡಿಗೆ ಹೋಗಬೇಕಾಗಿರಲಿಲ್ಲ. ದೇವೇಂದ್ರಾದಿ ದೇವತೆಗಳಿಗೆ ಚಾನ್ಸೂ ಸಿಗುತ್ತಿರಲಿಲ್ಲ.

Comments: Post a Comment



<< Home

This page is powered by Blogger. Isn't yours?